Untitled Document
Sign Up | Login    
ಮಂಜಿನ ಹನಿಯೂ ಹನುಮಾನ್ ಗುಂಡಿಯೂ


ಮೂಡುಬಿದಿರೆಯಿಂದ ಕಾರ್ಕಳ ಮಾರ್ಗವಾಗಿ ಕುದುರೆಮುಖದ ಕಡೆಗೆ ಅಂದಾಜು ೪೫ ಕಿಲೋಮೀಟರ್ ಪ್ರಯಾಣಿಸಿದರೆ ಈ ಸ್ವರ್ಗದಂತಹ ಜಾಗ ಸಿಗುತ್ತದೆ.ನೋಡಬಹುದಾದಂತಹ ಸುಂದರ ಪ್ರವಾಸಿತಾಣ ಇದಾಗಿದೆ. ದಾರಿಯುದ್ದಕ್ಕೂ ಮಂಜು ಮುಸುಕಿರುವಂತಹ ಇಲ್ಲಿಗೆ ಹೋಗುವಾಗ ಮಧ್ಯಾಹ್ನ ೧೨ ಗಂಟೆಗಾದರೂ ನೀವು ಹೆಡ್ ಲೈಟ್ ಹಾಕಲೇಬೇಕು.ಫೋಟೋಗ್ರಫಿಗಂತೂ ಹೇಳಿಮಾಡಿಸಿದ ಜಾಗ ಇದಾಗಿದೆ.ಎಲ್ಲಿ ನೋಡಿದರೂ ಹಸಿರು ತುಂಬಿಕೊಂಡಿರುವ ಈ ಜಾಗ ಕಣ್ಣನ್ನು ತಂಪಾಗಿಸುತ್ತದೆ.

ನೂರಾರು ಮೆಟ್ಟಿಲುಗಳನ್ನು ಇಳಿದು ಕೆಳಗೆ ಬಂದರೆ ಧುಮ್ಮಿಕ್ಕುವ ಜಲಪಾತ ಕಾಣಸಿಗುತ್ತದೆ.ಇಲ್ಲಿ ಈಜುವುದು ಅಪಾಯ ಎಂದು ಬರೆದಿದ್ದರೂ ನೀರಲ್ಲಿ ಮನಸಾರೆ ಈಜುವ ಹಲವಾರು ಜನರನ್ನೂ ಕಣಸಿಗುತ್ತದೆ.ನೋಡಲು ಎಷ್ಟು ಮೋಹಕವಾಗಿದೆಯೋ ಅಷ್ಟೇ ಅಪಾಯಕರವೂ ಆಗಿದೆ ಈ ಹನುಮಾನಗುಂಡಿ ಫಾಲ್ಸ್.ತುಂಬಾ ಚಳಿಯ ಪ್ರದೇಶವಾದ ಇಲ್ಲಿ ಲವರ‍್ಸ್ ಜಾಸ್ತಿ ಬರುತ್ತಾರೆ.ನೀರಲ್ಲಿ ದಿನವಿಡೀ ಎಂಜೋಯ್ ಮಾಡುತ್ತಾರೆ.
ಇಂತಹ ಮನಮೋಹಕ ಪ್ರವಾಸೀ ತಾಣಗಳಿಗೆ ಬಂದವರ ಮನಸ್ಸು ಉಲ್ಲಾಸವಾಗುತ್ತದೆ .ಮನಶ್ಶಾಂತಿ ಸಿಗುತ್ತದೆ.ರಜೆಗಳಲ್ಲಿ ಮಾಲ್ ,ಫಿಲಂ ಎಂದು ತಿರುಗಾಡುವುದರ ಜೊತೆಗೆ ಇಂತಹ ಜಾಗಗಳಿಗೂ ಭೇಟಿ ನೀಡಿದರೆ ಹೊಸ ಚೈತನ್ಯ ಬರುತ್ತದೆ.

 

Author :  

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited